ಕೃಷ್ಣಾಪುರ (ಮಂಗಳೂರು)
KFC ಕೃಷ್ಣಾಪುರ ವತಿಯಿಂದ ಆಯೋಜಿಸಲಾದ ಅಂಡರ್ಆರ್ಮ್ ಕ್ರಿಕೆಟ್ ಟೂರ್ನಮೆಂಟ್ 2025 ಡಿಸೆಂಬರ್ 21ರಂದು ಕ್ರಿಶ್ನಾಪುರದಲ್ಲಿ ಅದ್ಧೂರಿಯಾಗಿ ಜರುಗಲಿದೆ. ಈ ವರ್ಷದ ಟೂರ್ನಮೆಂಟ್ನ ಪ್ರಮುಖ ಆಕರ್ಷಣೆಯಾಗಿ ಭಾರತದ ಸ್ಟಾರ್ ವೇಗಿ ಬೌಲರ್ ಮೊಹಮ್ಮದ್ ಶಾಮಿ ಅವರ ಆಗಮನ, ಈ ಸುದ್ದಿ ಕ್ರಿಕೆಟ್ ಅಭಿಮಾನಿಗಳಲ್ಲಿ ಅಪಾರ ಉತ್ಸಾಹ ಸೃಷ್ಟಿಸಿದೆ.
ಮೊಹಮ್ಮದ್ ಶಾಮಿ ಅವರ ಹಾಜರಾತಿ ಸ್ಥಳೀಯ ಕ್ರೀಡಾಪ್ರೇಮಿಗಳಿಗೆ ದೊಡ್ಡ ಪ್ರೇರಣೆಯಾಗಲಿದ್ದು, ಟೂರ್ನಮೆಂಟ್ಗೆ ಮತ್ತಷ್ಟು ಕಳೆ ಹೆಚ್ಚಿಸಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಈ ಕಾರ್ಯಕ್ರಮದ ಪೋಸ್ಟರ್ಗಳು ವೈರಲ್ ಆಗಿ, ಮಂಗಳೂರು– ಕೃಷ್ಣಾಪುರ ಪ್ರದೇಶದಲ್ಲಿ ದೊಡ್ಡ ಕುತೂಹಲ ಮೂಡಿದೆ.
ಟೂರ್ನಮೆಂಟ್ಗೆ ಅನೇಕ ತಂಡಗಳು ಭಾಗವಹಿಸುತ್ತಿದ್ದು, ಕಠಿಣ ಪೈಪೋಟಿ ನಿರೀಕ್ಷಿಸಲಾಗಿದೆ.
KFC ಕೃಷ್ಣಾಪುರ ಆಯೋಜಕರ ಪ್ರಕಾರ:
“ಮೊಹಮ್ಮದ್ ಶಾಮಿ ಅವರ ಆಗಮನ ನಮ್ಮ ಟೂರ್ನಮೆಂಟ್ಗೆ ದೊಡ್ಡ ಗೌರವ. ಎಲ್ಲಾ ಕ್ರೀಡಾಭಿಮಾನಿಗಳು 21ರಂದು ಹಾಜರಾಗಿ ಈ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಲು ಆಹ್ವಾನಿಸುತ್ತೇವೆ,” ಎಂದು ತಿಳಿಸಿದ್ದಾರೆ.



0 Comments